ಶ್ರೀಕೃಷ್ಣ ಪ್ರಾಪರ್ಟಿಸ್ & ಪ್ರಮೋಟರ್ಸ್ ಲಾಂಛನದಡಿಯಲ್ಲಿ ನಿರ್ಮಾಣವಾಗಿರುವ ‘ಪಂಡಿತ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಕೃಷ್ಣೇಂದ್ರ ಪಂಡಿತ್ ಸಂಗೀತವನ್ನು ನೀಡಿ, ನೃತ್ಯ ನಿರ್ದೆಶನವನ್ನು ಮಾಡಿದ್ದಾರೆ. ಚಿತ್ರದ ನಿರ್ಮಾಪಕರೂ ಆಗಿರುವ ಕೃಷ್ಣೇಂದ್ರ ಪಂಡಿತ್ ಈ ಚಿತ್ರದ ಗಾಯಕರು ಹೌದು. ಸುರೇಶ್ಬಾಬು, ಮನೋಹರ್ ಛಾಯಾಗ್ರಹಣ ಹಾಗೂ ಜೋ.ನಿ.ಹರ್ಷ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣೇಂದ್ರ ಪಂಡಿತ್, ಮೆಘಶ್ರೀ, ದೀಪ, ಮಲ್ಲೇಶ್ ಎಡೆಹಳ್ಳಿ ಮುಂತಾದವರಿದ್ದಾರೆ.